ಬೆಂಗಳೂರು | ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಜೂನ್ 4 ರಂದು ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ (RCB Victory Stampede) ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು, ಈ ದುರಂತದ ಬೆನ್ನಲ್ಲೇ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿರುವ ಕ್ರಮ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿ : SSLC & PUC ನಂತರ ಮುಂದೇನು ಮಾಡಬೇಕು ಎಂದು ಗೊಂದಲದಲ್ಲಿದ್ದೀರಾ…?ಇಲ್ಲಿದೆ ನೋಡಿ ಗೋಲ್ಡನ್ ಅವಕಾಶ
ಸಾರ್ವಜನಿಕ ಆಕ್ರೋಶ – ಪೊಲೀಸರು ಬಲಿಪಶು..?
ಬಿ. ದಯಾನಂದ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದರ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದ್ದು, ದೋಷ ಸರ್ಕಾರದ ತಂತ್ರದಲ್ಲಿ ಇದೆ, ಆದರೆ ದಂಡನೆ ದಕ್ಷ ಅಧಿಕಾರಿಗಳಿಗೆ ಯಾಕೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
(RCB Victory Stampede) ಪೋಲೀಸ್ ಒಕ್ಕೂಟದಿಂದ ಸಿಎಂಗೆ ಪತ್ರ
ಈ ನಡುವೆ, ಭಾರತೀಯ ಪೊಲೀಸ್ ಸೇವಾ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅಭ್ಯರ್ಥಿತ್ಮ ತನಿಖೆ ಮುಗಿಯುವವರೆಗೆ ಅಮಾನತುಗೊಂಡ ಅಧಿಕಾರಿಗಳನ್ನು ಪುನರ್ ನೇಮಿಸಿ. ಶಿಸ್ತು ಕ್ರಮ ತೆಗೆದುಕೊಳ್ಳಬೇಕಾದರೆ ತನಿಖೆಯ ವರದಿ ಆಧರಿಸಿ ಕೈಗೆೊಳ್ಳಿ ಎಂದು ಒತ್ತಾಯಿಸಿದೆ.
ಪತ್ರದ ಸಾರಾಂಶ
- ಕಾಲ್ತುಳಿತ ದುರಂತದ ಬಗ್ಗೆ ವಿಷಾದ.
- ತನಿಖೆಗೆ ಆದೇಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ.
- ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವುದು ನೈತಿಕತೆಗೂ, ಪ್ರೊಫೆಷನಲ್ ಹೊಣೆಗಾರಿಕೆಗೂ ವಿರುದ್ಧ.
- ಇಂತಹ ಜನಹಿತ ಕಾರ್ಯಕ್ರಮಗಳು ವಿವಿಧ ಇಲಾಖೆಗಳ ಸಂಯುಕ್ತ ಜವಾಬ್ದಾರಿ.
- ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳನ್ನು ಪುನರ್ ನೇಮಿಸುವಂತೆ ವಿನಂತಿ.
ಕಾಂಗ್ರೆಸ್ ಪ್ರತಿಕ್ರಿಯೆ
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಬಿ. ದಯಾನಂದ್ ಅವರು ಉತ್ತಮ ಅಧಿಕಾರಿಯಾಗಿದ್ದರೂ, ಘಟನೆ ವೇಳೆ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡದ ಕಾರಣ ಈ ಕ್ರಮ ಅಗತ್ಯವಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳ ಪಟ್ಟಿ
1. ಬಿ. ದಯಾನಂದ್ – ಬೆಂಗಳೂರು ನಗರ ಪೊಲೀಸ್ ಆಯುಕ್ತ
2. ಎಚ್.ಟಿ. ಶೇಖರ್ – ಡಿಸಿಪಿ, ಕೇಂದ್ರ ವಿಭಾಗ
3. ವಿಕಾಸ್ ಕುಮಾರ್ – ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ
4. ಬಾಲಕೃಷ್ಣ – ಎಸಿಪಿ
5. ಗಿರೀಶ್ ಎ.ಕೆ – ಇನ್ಸ್ಪೆಕ್ಟರ್, ಕಬ್ಬನ್ ಪಾರ್ಕ್

ಈ ಪ್ರಕರಣ ರಾಜ್ಯದ ಆಡಳಿತ ಯಂತ್ರದಲ್ಲೂ ತೀವ್ರ ಬಿಸಿಯನ್ನೆರಗಿಸಿದೆ. ಅಧಿಕಾರಿಗಳ ಅಮಾನತು ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ, ನಿರ್ಣಯದ ಶುದ್ಧತೆ ಹಾಗೂ ಭವಿಷ್ಯದ ಜವಾಬ್ದಾರಿಯ ಕುರಿತಂತೆ ಪ್ರಶ್ನೆಗಳು ಹುಟ್ಟಿಕೊಂಡಿವೆ.
One thought on “RCB Victory Stampede | ಭಾರತೀಯ ಪೊಲೀಸ್ ಒಕ್ಕೂಟದಿಂದ ಸಿಎಂಗೆ ಪತ್ರ..!”