ತುಮಕೂರು | ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ (Hemavathi Express Canal) ಯೋಜನೆ ಬಗ್ಗೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಆರ್ಸಿಬಿಯಲ್ಲಿ ಗೊಂದಲ ಮಾಡಿದಂತೆ, ಹೇಮಾವತಿಯಲ್ಲೂ ಮಾಡಿಕೊಳ್ಳಬೇಡಿ. ಆಗುವ ಯಾವುದೇ ಗಲಭೆಗೆ ಸರ್ಕಾರವೇ ನೇರ ಹೊಣೆಗಾರರಾಗುತ್ತದೆ ಎಂದಿದ್ದಾರೆ.
ಲಿಂಕ್ ಕೆನಾಲ್ (Hemavathi Express Canal) ಯೋಜನೆಯ ವೈಜ್ಞಾನಿಕತೆ ಬಗ್ಗೆ ಅನುಮಾನ
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಗೌಡ, ಅವೈಜ್ಞಾನಿಕ ಯೋಜನೆಯಿಂದ ತುಮಕೂರು ಜಿಲ್ಲೆಯ 8 ತಾಲ್ಲೂಕುಗಳಿಗೆ ನೀರು ಸಿಗುವುದಿಲ್ಲ. 1400 ಕ್ಯೂಸೆಕ್ಸ್ ನೀರನ್ನು ಡೈವರ್ಸ್ ಮಾಡಿದರೆ ನೀರಿನ ವೇಗ ಕುಗ್ಗಿ, ಮುಂದಿನ ಕೆರೆಗಳಿಗೆ ನೀರು ತಲುಪುವುದಿಲ್ಲ ಎಂಬ ಆತಂಕ ನಮಗಿದೆ ಎಂದರು.
ಇದನ್ನು ಓದಿ : Caste Census | ಜಾತಿಗಣತಿ ವಿರೋಧಿಸಿದ ಬಿಜೆಪಿಗೆ ಕುಟುಕಿದ ಡಿ ಕೆ ಶಿವಕುಮಾರ್
ಐಐಟಿ ತಾಂತ್ರಿಕ ಸಮೀಕ್ಷೆ ಅಗತ್ಯ
ರಾಯಚೂರು, ಧಾರವಾಡ, ಹುಬ್ಬಳ್ಳಿ ಐಐಟಿಗಳ ಮೂಲಕ ಯೋಜನೆಯ ತಾಂತ್ರಿಕವಾಗಿ ಕಾರ್ಯಸಾಧ್ಯತೆ ಪರಿಶೀಲಿಸಬೇಕು. ಹೈಡ್ರಾಲಿಕ್, ವೆಲಾಸಿಟಿ, ನೀರಿನ ಹರಿವಿನ ಎಲ್ಲ ಅಂಶಗಳನ್ನು ವೈಜ್ಞಾನಿಕವಾಗಿ ನೋಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಕ್ಕೆ ಜನರ ವಿಶ್ವಾಸ ಕಳೆದುಹೋಗದಂತೆ ನೋಡಿಕೊಳ್ಳಿ
ಕಾಟಾಚಾರದ ಸಭೆ ಕರೆದು ತಿಪ್ಪೆಸಾರಿಸುವ ಯೋಜನೆ ಸಲ್ಲದು. ರೈತರ ಜೀವದ ಮೇಲೆ ನೀರು ತೆಗೆದುಕೊಂಡು ಹೋಗುವ ಕೆಲಸ ಸರ್ಕಾರ ಮಾಡಬಾರದು. ದಬ್ಬಾಳಿಕೆ ಮಾಡಲು ಹೊರಟರೆ ರೈತರಿಂದ ತಕ್ಕ ಉತ್ತರ ಸಿಗುವುದು ಖಚಿತ ಎಂದೂ ಎಚ್ಚರಿಸಿದರು.

ಪಕ್ಷ ರಾಜಕೀಯಕ್ಕೂ ಅಳಿದು ಹೋಗದಂತೆ ಎಚ್ಚರಿಕೆ
ಜಿಲ್ಲೆಯಲ್ಲಿ 6 ಕಾಂಗ್ರೇಸ್ ಶಾಸಕರು ಗೆದ್ದಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ನ ಭವಿಷ್ಯ ಉಳಿಯಬೇಕಾದರೆ, ಈ ಯೋಜನೆಯನ್ನು (Hemavathi Express Canal) ಮರು ಪರಿಶೀಲಿಸಬೇಕು. ನಾವು ಯಾವುದೇ ತಾರತಮ್ಯವಿಲ್ಲದೆ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಟ್ಟಿದ್ದೇವೆ. ಆದರೆ, ಅವರು ರೈತರ ಭರವಸೆಯನ್ನು ಉಳಿಸಬೇಕು ಎಂದರು.
One thought on “Hemavathi Express Canal | ತುಮಕೂರಿನಲ್ಲಿ ಕಾಂಗ್ರಸ್ ಭವಿಷ್ಯ ಉಳಿಯುವಂತೆ ಮಾಡಿ – ಸುರೇಶ್ ಗೌಡ”