ಬಾಗಲಕೋಟೆ | ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಐ ಆಧಾರಿತ ಹಾಜರಾತಿ (AI Attendance) ಜಾರಿ ಆಗಲಿದೆ. ಮುಂದೆ ಶಾಲೆಗಳಲ್ಲಿನ ಶಿಕ್ಷಕರೂ, ವಿದ್ಯಾರ್ಥಿಗಳೂ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆಗೆ ಒಳಪಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಎಐ ಆಧಾರಿತ (AI Attendance) ಹಾಜರಾತಿಗೆ ಒತ್ತು ಕೊಟ್ಟ ಸರ್ಕಾರ
ಇದನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ವರ್ಷವೇ ಕೆಲವು ಬದಲಾವಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತೇವೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ವಿವರಿಸಿದ್ದಾರೆ.
ಇದನ್ನು ಓದಿ : Tumkur City | 14 ಗ್ರಾಮ ಪಂಚಾಯತಿಗಳು ತುಮಕೂರು ನಗರ ವ್ಯಾಪ್ತಿಗೆ ಸೇರ್ಪಡೆ
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ CET ಮತ್ತು NEET ತರಬೇತಿ
ರಾಜ್ಯದ ಸರ್ಕಾರಿ ಶಾಲೆಗಳ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ CET ಮತ್ತು NEET ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ಎಲ್ಲಾ ಮಕ್ಕಳಿಗೂ ತರಬೇತಿ ನೀಡಲು ಸೂಚನೆ ನೀಡಿದ್ದೇನೆ, ಎಂದು ಸಚಿವರು ಹೇಳಿದರು.
16,500 ಹೊಸ ಶಿಕ್ಷಕರ ನೇಮಕಾತಿ ಸಿದ್ಧ
ಒಳ ಮೀಸಲಾತಿ ಜಾರಿಗೆ ತರುವಂತೆ, 16,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಜೊತೆಗೆ, ಈ ವರ್ಷದಿಂದಲೇ ಆದರ್ಶ ಶಾಲೆಗಳಲ್ಲಿ ಪಿಯುಸಿ ಕಾಲೇಜುಗಳು ಆರಂಭಗೊಳ್ಳಲಿವೆ.

ಮತ್ತೆ ಪಠ್ಯದಲ್ಲಿ ನೈತಿಕ ವಿಜ್ಞಾನ
ಬಾಲ್ಯ ಗರ್ಭಧಾರಣೆ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ನೈತಿಕ ವಿಜ್ಞಾನ (Moral Science) ವಿಷಯವನ್ನು ಮತ್ತೆ ಅಳವಡಿಸುವ ಚಿಂತನೆ ನಡೆದಿದೆ. ಇದು 10-15 ವರ್ಷಗಳಿಂದ ಇಲ್ಲದಿತ್ತು. ಮಕ್ಕಳಲ್ಲಿ ನೀತಿ ಕಳೆದುಹೋಗಿದೆ. ಈ ವರ್ಷದ ಪಠ್ಯಪುಸ್ತಕಗಳಲ್ಲಿ ಅದನ್ನು ಸೇರಿಸಲಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.
One thought on “AI Attendance | ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಬಿಗ್ ಅಪ್ ಡೇಟ್”