ಬೆಂಗಳೂರು | ಬೇಸಿಗೆಯ ತೀವ್ರತೆ ಹೆಚ್ಚಾದಂತೆ, ನೀರಿನ ತುರ್ತು ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಜಲಮಂಡಳಿಯ ಕಾವೇರಿ ಸಂಚಾರಿ ಟ್ಯಾಂಕರ್ (Cauvery water tank) ಯೋಜನೆಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಯೋಜನೆಯು ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿ ಲೀಟರ್ ನೀರನ್ನು ಮಾರಾಟ ಮಾಡಿರುವ ದಾಖಲೆ ಬರೆದಿದೆ.
ಕಾವೇರಿ ಟ್ಯಾಂಕರ್ಗಳ (Cauvery water tank) ಮೂಲಕ 14 ಲಕ್ಷ ರೂ. ಆದಾಯ
ಈ ಬಗ್ಗೆ ಮಾತನಾಡಿದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್, ಈ ಯೋಜನೆಯಡಿಯಲ್ಲಿ ಇನ್ನು ತನಕ 1532 ಕಾವೇರಿ ಟ್ಯಾಂಕರ್ಗಳ ಮೂಲಕ ನಗರದಲ್ಲಿನ ವಿವಿಧ ಭಾಗಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಇದರಿಂದ ಜಲಮಂಡಳಿಗೆ ಸುಮಾರು 14 ಲಕ್ಷ ರೂ. ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : Bike Taxi Ban | ಓಲಾ, ಉಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳು ಬಂದ್..!
ಹೆಚ್ಚಾಗಿ ಪೂರ್ವ ಬೆಂಗಳೂರು, ಕೆಆರ್ ಪುರಂ, ಮಹಾದೇವಪುರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಮಾರಾಟವಾಗಿದೆ. ಇದರಲ್ಲಿ ಶೇಕಡಾ 50 ರಷ್ಟು ನೀರನ್ನು ಐಟಿ-ಬಿಟಿ ಕಂಪನಿಗಳು ಬಳಸಿದ್ದು, ನಿರಂತರವಾಗಿ ಈ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಗ್ರಾಹಕರಿಗೆ ಸುಲಭ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯೂ ಜಾರಿಗೆ ತಂದಿದ್ದು, ಬಳಕೆದಾರರು ಮನೆ ಬಾಗಿಲಿಗೆ ನೀರು ಪಡೆಯುತ್ತಿದ್ದಾರೆ.

ಕಾವೇರಿ ನೀರನ್ನು (Cauvery water tank) ಅಧಿಕೃತವಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಈ ಯೋಜನೆಯು ಕಾನೂನುಬದ್ಧ ಮತ್ತು ವೈಜ್ಞಾನಿಕ ನೀತಿ ಆಧಾರಿತ ವ್ಯವಸ್ಥೆಯಾಗಿ ಜನಮನ್ನಣೆ ಪಡೆದುಕೊಂಡಿದ್ದು, ಬೇಸಿಗೆ ಬಿಸಿ ದಿನಗಳಲ್ಲಿ ಸಾರ್ವಜನಿಕರ ನಿರೀಕ್ಷೆ ಪೂರೈಸಲು ಯಶಸ್ವಿಯಾಗಿದೆ.