Child Safety | ತಂದೆ ಮಾಡಿದ ಎಡವಟ್ಟಿಗೆ ದಾರುಣವಾಗಿ ಸಾವನ್ನಪ್ಪಿದ ಮಗು

ಮಂಗಳೂರು | ಪುಟಾಣಿ ಮಕ್ಕಳನ್ನು (Child Safety) ಸಾಕುವಾಗ ಎಚ್ಚರಿಕೆ ಅತ್ಯವಶ್ಯಕ. ಇಲ್ಲೊಂದು ದಾರುಣ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನ ಅಡ್ಯಾರ್‌ನಲ್ಲಿ ಕೇವಲ ಹತ್ತು ತಿಂಗಳ ಮಗು ಬೀಡಿ ತುಂಡು ನುಂಗಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆ ಸೇದಿದ ಬೀಡಿಯನ್ನು ಶಿಶು ಬಾಯಿಗೆ ಹಾಕಿ ನುಂಗಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿದ (Child Safety) ಮಗು

ಅಡ್ಯಾರ್ ಪ್ರದೇಶದಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಗಳ ಮಗುವಾಗಿ ಜನಿಸಿದ ಅನೀಶ್ ಕುಮಾರ್, ಶನಿವಾರ ಮಧ್ಯಾಹ್ನ 1.25ರ ಸುಮಾರಿಗೆ ಅನಾರೋಗ್ಯಕ್ಕೆ ಒಳಗಾದರೆಂದು ತಕ್ಷಣವೇ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡಿದರೂ ಕೂಡ, ಭಾನುವಾರ ಬೆಳಗ್ಗೆ 10.25ಕ್ಕೆ ಮಗು ಮರಣಹೊಂದಿತು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನು ಓದಿ : Special Action Force | ಕೋಮು ವೈಷಮ್ಯ ತಡೆಯಲು ದೇಶದ ಮೊದಲ Special Action Force ರೆಡಿ

ಘಟನೆಯ ನಂತರ ಮಗುವಿನ (Child Safety) ತಾಯಿ ಲಕ್ಷ್ಮಿದೇವಿ, ಮಂಗಳೂರಿನ ಪೊಲೀಸರಿಗೆ ದೂರು ನೀಡಿದ್ದು, ನನ್ನ ಗಂಡ ಬೀಡಿ ಸೇದಿದ ಮೇಲೆ ಬೀಡಿಯನ್ನು ಮನೆಯಲ್ಲಿಯೇ ಎಡವಟ್ಟಾಗಿ ಎಲ್ಲೆಲ್ಲಿ ಬಿಸಾಡುತ್ತಿದ್ದರು. ನಾನು ಅವನಿಗೆ ಅನೇಕ ಬಾರಿ, ಬೀಡಿಯನ್ನು ಪೂರ್ತಿ ನಂದಿಸಿ, ಕಸದ ಬುಟ್ಟಿಗೆ ಹಾಕು ಎಂದು ಹೇಳಿದ್ದೆ. ಆದರೆ ನನ್ನ ಮಾತು ಕಡೆಗಣಿಸಿ, ಈಗ ಮಗುವಿನ ಜೀವವನ್ನೇ ಕಳೆದುಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

One thought on “Child Safety | ತಂದೆ ಮಾಡಿದ ಎಡವಟ್ಟಿಗೆ ದಾರುಣವಾಗಿ ಸಾವನ್ನಪ್ಪಿದ ಮಗು

Leave a Reply

Your email address will not be published. Required fields are marked *