ನವದೆಹಲಿ | ಜಾತಿಗಣತಿ (Caste Census) ವಿರೋಧಿಸಿದ್ದ ಬಿಜೆಪಿ ಈಗ ಮರು ಸಮೀಕ್ಷೆ ವಿರೋಧಿಸುತ್ತಿರುವುದೇಕೆ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಾತಿಗಣತಿ (Caste Census) ವರದಿಯನ್ನು ಬಿಜೆಪಿ ಸಂಪೂರ್ಣವಾಗಿ ತಿರಸ್ಕರಿಸಿತು. ಆದರೆ ಈಗ ಸರ್ಕಾರ ಗೊಂದಲ ನಿವಾರಣೆಗೆ ಮುಂದಾದರೆ ಅದನ್ನೂ ವಿರೋಧಿಸುತ್ತಿದ್ದಾರೆ. ಈ ವರದಿಯಲ್ಲಿರುವ ಕೊರತೆಯನ್ನು ಸರಿಪಡಿಸಿ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದರು.
ಮರು ಸಮೀಕ್ಷೆ ವೈಜ್ಞಾನಿಕವಾಗಿತ್ತೇ..?
ಹಿಂದಿನ ಸಮೀಕ್ಷೆ ಅಧಿಕಾರಿಗಳಿಂದ ಮನೆಮನೆಗೆ ಹೋಗಿ ಚೀಟಿ ಅಂಟಿಸುವ ಮೂಲಕ ನಡೆದಿದ್ದು, ವೈಜ್ಞಾನಿಕವಾಗಿಯೇ ನಡೆದಿತ್ತು. ಈ ಬಾರಿ ಹೆಚ್ಚಿನ ಜನರನ್ನು ಒಳಗೊಂಡಂತೆ ನಿಖರ ಮಾಹಿತಿಯೊಂದಿಗೆ ಮುಂದಾಗುತ್ತೇವೆ ಎಂದಿದ್ದಾರೆ.
ಇದನ್ನು ಓದಿ : Rainy Season Business | ಮಳೆಗಾಲದಲ್ಲಿ ಈ ಬಿಜಿನೆಸ್ ಮಾಡಿದರೆ ಖಂಡಿತ ಲಾಸ್ ಆಗಲ್ಲ
ಪ್ರಬಲ ಜಾತಿಗಳ (Caste Census) ಒತ್ತಡ..?
ನಾವು ಎಲ್ಲರ ಒತ್ತಡಕ್ಕೂ ಮಣಿಯುತ್ತೇವೆ – ಮಾಧ್ಯಮಗಳದಕ್ಕೂ ಸಹ ಎಂದು ಹಾಸ್ಯಮಿಶ್ರಿತ ಉತ್ತರ ನೀಡಿದ ಡಿಸಿಎಂ, ವೀರಶೈವ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯದ ಸ್ವಾಮೀಜಿಗಳು ನಮ್ಮ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಅವರು ತಮ್ಮ ಸಮುದಾಯದವರಿಗೆ ಸಮೀಕ್ಷೆಯಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದಾರೆ ಎಂದು ಹೇಳಿದರು.

ರಾಜಕೀಯ ಅಜೆಂಡಾದ ಭಾಗವೇ ಜಾತಿಗಣತಿ
ಜಾತಿಗಣತಿ (Caste Census) ನಮ್ಮ ಪಕ್ಷದ ರಾಜಕೀಯ ಅಜೆಂಡಾದ ಭಾಗ. ಬಿಜೆಪಿಯವರು ಅದನ್ನು ನಕಲಿಸಿದ್ದಾರೆ. ರಾಹುಲ್ ಗಾಂಧಿಯವರು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೆಂದು ಈ ದೃಷ್ಟಿಕೋಣವನ್ನು ಒತ್ತಿಹೇಳಿದ್ದಾರೆ ಎಂದು ತಿಳಿಸಿದ್ದಾರೆ.