ಬೆಂಗಳೂರು | ಪರಿಸರ ಸಂರಕ್ಷಣೆಗಾಗಿ (Environmental Education) ಜನರಲ್ಲಿ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಹಂತದಲ್ಲೇ ಪರಿಸರ ಪ್ರೀತಿ ಬೆಳೆಸಬೇಕು. ಅದಕ್ಕಾಗಿ ಪರಿಸರ ಶಿಕ್ಷಣವನ್ನು ಪಠ್ಯಕ್ರಮವಾಗಿಸುವ ನಿರ್ಧಾರ ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ಲಾಸ್ಟಿಕ್ ಮಾಲಿನ್ಯ (Environmental Education) ತಡೆಯಲು ಸರ್ಕಾರದ ನಿರ್ಧಾರ
ಅರಣ್ಯ, ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ 2025 ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ಈ ಬಾರಿಯ ಪರಿಸರ ದಿನದ ಘೋಷವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ. ಇದು ಅನಾಯಾಸದ ಕಾರ್ಯವಲ್ಲ, ಆದರೆ ಇದನ್ನು ನಾವು ಕೈಗೆತ್ತಿಕೊಳ್ಳಲೇಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯಗಳತ್ತ ಮುಖ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಇದನ್ನು ಓದಿ : Child Safety | ತಂದೆ ಮಾಡಿದ ಎಡವಟ್ಟಿಗೆ ದಾರುಣವಾಗಿ ಸಾವನ್ನಪ್ಪಿದ ಮಗು
ಬೆಂಗಳೂರು ನಗರದಲ್ಲಿ ದಿನಕ್ಕೆ 900 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಜನಸಂಖ್ಯೆ ಹಾಗೂ ತ್ಯಾಜ್ಯ ನಿರ್ವಹಣೆಯ ನಡುವೆ ಸಮತೋಲನ ಕಾಪಾಡುವುದು ಬಹುಮುಖ್ಯ. ಜನರಲ್ಲಿ ಪರಿಸರ (Environmental Education) ಜ್ಞಾನ ಬೆಳೆಸುವ ಜವಾಬ್ದಾರಿ ಸರ್ಕಾರದ ಜೊತೆಗೆ ಪ್ರತಿಯೊಬ್ಬ ನಾಗರಿಕರದೂ ಇದೆ ಎಂದರು.

ಪಶ್ಚಿಮ ಘಟ್ಟ, ನದಿಗಳು, ಕಾಡುಗಳು, ಜೀವಜಲ ಈ ಎಲ್ಲಾ ಸಹಜ ಸಂಪತ್ತುಗಳನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆ. ಪರಿಸರವನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ ಎಂಬ ಗಂಭೀರ ಸಂದೇಶವನ್ನು ಅವರು ನೀಡಿದರು.
One thought on “Environmental Education | ಪರಿಸರ ಸಂರಕ್ಷಣೆಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರ..!”