Fire Accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಹುಲ್ಲಿನ ಬಣವೆ ಸುಟ್ಟು ಭಸ್ಮ..!

ತುಮಕೂರು | ತಾಲ್ಲೂಕಿನ ಹಾಲುಹೊಸಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Accident) ರೈತನೊಬ್ಬ ಸಂಗ್ರಹಿಸಿದ್ದ ರಾಗಿ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಲಕ್ಷಕ್ಕೂ ಹೆಚ್ಚು ಮೌಲ್ಯದ ನಷ್ಟ ಸಂಭವಿಸಿದೆ.

ಹುಲ್ಲಿನ ಬಣವೆ ಬೆಂಕಿಗೆ (Fire Accident) ಆಹುತಿ

ಗೂಳೂರು ಹೋಬಳಿಯ ಹಾಲುಹೊಸಹಳ್ಳಿ ಗ್ರಾಮದ ರೈತ ರಂಗಸ್ವಾಮಿ ಅವರು ಜಾನುವಾರುಗಳ ಮೇವಿಗಾಗಿ ತಮ್ಮ ಹಿತ್ತಲಲ್ಲಿ ರಾಗಿ ಹುಲ್ಲು ಸಂಗ್ರಹಿಸಿ ಬಣವೆ ಹಾಕಿದ್ದರು. ಹಠಾತ್‌ವಾಗಿ ಈ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ರೈತ ರಂಗಸ್ವಾಮಿ ಅವರ ಕುಟುಂಬಸ್ಥರು ನೆರೆಯ ತೋಟದವರನ್ನು ಕೂಗಿದ್ದಾರೆ. ತಕ್ಷಣ ಅಕ್ಕಪಕ್ಕದ ಜನರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದು ಭಾರೀ ಪ್ರಮಾಣದಲ್ಲಿ ಹರಡಿದ ಪರಿಣಾಮ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.

ಇದನ್ನು ಓದಿ : RCB Event Tragedy | ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಬಿಜೆಪಿಗರಿಗೆ ಸಿಎಂ ಟಾಂಗ್

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಆದರೆ ಆಗಾಗಲೇ ಬಣವೆ ಸಂಪೂರ್ಣವಾಗಿ ಭಸ್ಮವಾಗಿತ್ತು. ಸುಮಾರಿಗೆ ₹1 ಲಕ್ಷಕ್ಕೂ ಅಧಿಕ ಮೌಲ್ಯದ ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿದ್ದು, ರೈತ ರಂಗಸ್ವಾಮಿ ಅವರು ಜಾನುವಾರುಗಳ ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂದು ರೈತರು ಬೆಳೆ ಅನಾಹುತದ ವಿರುದ್ಧ ನಿರಂತರ ಹೋರಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

One thought on “Fire Accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಹುಲ್ಲಿನ ಬಣವೆ ಸುಟ್ಟು ಭಸ್ಮ..!

Leave a Reply

Your email address will not be published. Required fields are marked *