Hemavathi Link Canal | ಜೈಲಿನಿಂದ ಬಿಡುಗಡೆಯಾದವರಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ ಸುರೇಶ್ ಗೌಡ

ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Link Canal) ಯೋಜನೆ ವಿರುದ್ಧ ಹೋರಾಟ ನಡೆಸಿದ್ದ ಹೋರಾಟಗಾರರಲ್ಲಿ ನಾಲ್ವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಮೇ 31ರಂದು ಗುಬ್ಬಿಯ ಸಂಕಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಐವರ ಪೈಕಿ ನಾಲ್ವರು ಮಂಗಳವಾರ ಸಂಜೆ ಭೋವಿಪಾಳ್ಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಲಿಂಕ್ ಕೆನಾಲ್ (Hemavathi Link Canal) ವಿರುದ್ಧ ಹೋರಾಡಿದ ಬಿಜೆಪಿ ಮುಖಂಡರು

ಬಿಜೆಪಿ ಮುಖಂಡರಾದ ಎಚ್.ಬಿ. ನವಚೇತನ, ಬೆಣಚಿಕೆರೆ ಲೋಕೇಶ್, ಎಚ್.ಎನ್. ಚೇತನ, ಬಿ.ವಿ. ಆನಂದ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಅವರು ಉಚಿತವಾಗಿ ವಾದಿಸಿದ್ದಾರೆ.

ಶಾಸಕ ಬಿ. ಸುರೇಶ್ ಗೌಡ ನೇತೃತ್ವದಲ್ಲಿ ಜೈಲಿನ ಬಳಿ ಹೋರಾಟಗಾರರಿಗೆ ಹಾರ ಹಾಕಿ ಸ್ವಾಗತ ನೀಡಿ, ಅವರು ಜಿಲ್ಲೆಗಾಗಿ ಹೋರಾಡಿದ್ದು, ಯಾವುದೇ ವೈಯಕ್ತಿಕ ಹಿತಾಸಕ್ತಿಗಲ್ಲ. ಅವರ ಧೈರ್ಯ ಮತ್ತು ಬದ್ಧತೆಗೆ ನಮಸ್ಕಾರ ಎಂದು ಹೇಳಿದರು.

ಇದನ್ನು ಓದಿ : Hemavathi Express Canal | ತುಮಕೂರಿನಲ್ಲಿ ಕಾಂಗ್ರಸ್ ಭವಿಷ್ಯ ಉಳಿಯುವಂತೆ ಮಾಡಿ – ಸುರೇಶ್ ಗೌಡ

ಇದೇ ವೇಳೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಮಾಯಕ ರೈತರನ್ನು ಬಂಧಿಸಿ ಹೋರಾಟ ಹತ್ತಿಕ್ಕಲು ಯತ್ನಿಸಿದರೆ, ಮುಂದಿನ ಹೋರಾಟ ಉಗ್ರವಾಗುತ್ತದೆ. ಲಾಠಿ, ಗೋಲಿ ಯಾರನ್ನೂ ಬೆದರಿಸಲು ಸಾಧ್ಯವಿಲ್ಲ  ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಹೋರಾಟ ಸಮಿತಿಯ ಸಂಚಾಲಕ ಪ್ರಭಾಕರ್, ಸಂದೀಪ್ ಗೌಡ, ಶಂಭು ಹನುಮಂತರಾಜು, ಧನುಷ್ ಪಾಳೇಗಾರ ಸೇರಿದಂತೆ ನೂರಾರು ಬೆಂಬಲಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *