Karnataka Rain Updates | ಜೂನ್ 19 ರ ವರೆಗೆ ರಾಜ್ಯದಾದ್ಯಂತ ಭಾರೀ ಮಳೆ

ಬೆಂಗಳೂರು | ಕರ್ನಾಟಕದಲ್ಲಿ ಮುಂಗಾರು ಪ್ರವೇಶವಾದರೂ ಮೊದಲ ದಿನಗಳಲ್ಲಿ ಮಳೆಯ (Karnataka Rain Updates) ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಮಳೆಯ ಅಬ್ಬರ (Karnataka Rain Updates) ಶುರುವಾಗಿದೆ. ಹವಾಮಾನ ಇಲಾಖೆ ಇತ್ತೀಚೆಗಷ್ಟೆ ಜೂನ್ 19 ರವರೆಗೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ (Karnataka Rain Updates) ಎಚ್ಚರಿಕೆ

ರೆಡ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ

ಆರೆಂಜ್ ಅಲರ್ಟ್: ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು

ಯೆಲ್ಲೋ ಅಲರ್ಟ್: ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ

ಮಂಗಳೂರು, ಶಕ್ತಿ ನಗರ, ಬಂಟ್ವಾಳ, ಭಾಗಮಂಡಲ, ಉಪ್ಪಿನಂಗಡಿ, ಧರ್ಮಸ್ಥಳ, ಉಡುಪಿ, ಸುಳ್ಯ, ಕಾರ್ಕಳ, ಪುತ್ತೂರು, ಶೃಂಗೇರಿ, ಗೇರುಸೊಪ್ಪ, ಮುಲ್ಕಿ, ಕುಂದಾಪುರ, ಕಾರವಾರ, ಹೊನ್ನಾವರ, ನಾಪೋಕ್ಲು, ಕುಮಟಾ, ಬೇಲೂರು, ಹೊಸಕೋಟೆ, ಸಂಕೇಶ್ವರ ಸೇರಿದಂತೆ ಇನ್ನೂ ಹಲವೆಡೆ ಮಳೆಯ ದಾಖಲೆಗಳು ಬಂದಿವೆ.

ಬೆಂಗಳೂರು ನಗರ ಮತ್ತು HAL ಪ್ರದೇಶಗಳಲ್ಲಿ ತಂಪಾದ ಗಾಳಿ, ಮೋಡ ಆವರಿಸಿದ ವಾತಾವರಣ ಕಂಡುಬಂದಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 26.7°C, ಕನಿಷ್ಠ 19.9°C ದಾಖಲಾಗಿದೆ.

ಇದನ್ನು ಓದಿ : Tata Group Success | ಟಾಟಾ ಗ್ರೂಪ್ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಗೊತ್ತಾ..?

ಹವಾಮಾನ ವಿವರಗಳು (ಕೆಲವು ನಗರಗಳು)

ಕಾರವಾರ: 30.2°C / 23.7°C

ಹಾವೇರಿ: 27.2°C / 21.6°C

ಕಲಬುರಗಿ: 31.8°C / 23.8°C

ಬೀದರ್: 33.0°C / 22.5°C

ಬಾಗಲಕೋಟೆ: 33.2°C / 23.3°C

ಧಾರವಾಡ: 27.2°C / 20.0°C

ಮುಂದಿನ ಕೆಲವು ದಿನಗಳು ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *