Kunigal, Link Canal work | ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸದೆ ಬಿಡಲ್ಲ – ರಂಗನಾಥ್ ಶಪಥ

ತುಮಕೂರು | ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ತಲುಪಿಸುವ ಕನಸಿನ ಯೋಜನೆಯಾದ ಲಿಂಕ್ ಕೆನಾಲ್ ಕಾಮಗಾರಿ (Kunigal, Link Canal work) ಬಹುದಿನಗಳ ಹೋರಾಟದ ಫಲವಾಗಿ ಪ್ರಾರಂಭವಾಗಿದೆ. ಈ ಮಹತ್ವದ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ನಾನು ಕಾಮಗಾರಿ (Kunigal, Link Canal work) ಸ್ಥಳಕ್ಕೆ ಭೇಟಿ ನೀಡಿದೆ ಎಂದು ಶಾಸಕ ರಂಗನಾಥ್ ಹೇಳಿದ್ದಾರೆ.

ಇದನ್ನು ಓದಿ : Yoga or Gym | ಯೋಗ ಅಥವಾ ಜಿಮ್ ಯಾವುದು ಬೆಸ್ಟ್..?

ನನ್ನ ಕುಣಿಗಲ್ ಜನತೆಗೆ ಕೊಟ್ಟ ಮಾತು ನನಗೆ ಪವಿತ್ರ. ನೀರಿಗಾಗಿ ಆಕ್ರಂದಿಸುತ್ತಿರುವ ರೈತರ ಬಾಯಿ ಮುಚ್ಚಲು ಇದು ಏಕೈಕ ಅವಕಾಶ. ಈ ಯೋಜನೆಯ ಮೂಲಕ ನಮ್ಮ ಪಾಲಿನ ನೀರನ್ನು ನಾವೇ ಪಡೆಯಲು ಅವಕಾಶ ಸಿಕ್ಕಿದೆ.

ಲಿಂಕ್ ಕೆನಾಲ್ (Kunigal, Link Canal work) ವಿರೋಧಿಸಿದ ಸ್ನೇಹಿತರಿಗೆ ಮನವಿ

ನನ್ನೊಂದಿಗೆ ನಿಮ್ಮ ರಾಜಕೀಯ ಭಿನ್ನಮತಗಳು ಅಸ್ತಿತ್ವದಲ್ಲಿದ್ದರೂ, ಈ ಸಂದರ್ಭದಲ್ಲಿ ರೈತರ ಹಿತಕ್ಕೆ ಒಂದಾಗಿ ಯೋಚಿಸುವ ಸಮಯವಿದು. ನಾನು ಬೇರೆ ಯಾರದಾದರೂ ಪಾಲಿನ ನೀರನ್ನು ಕೇಳುತ್ತಿಲ್ಲ – ನಮ್ಮ ನ್ಯಾಯವಾದ ಪಾಲಿನ ನೀರಿಗಾಗಿ ಮಾತ್ರ ಹೋರಾಟ ನಡೆಸುತ್ತಿದ್ದೇನೆ. ಕುಣಿಗಲ್ ಮತ್ತು ತುಮಕೂರು ರೈತರು ಒಂದೇ ಎಂಬ ನಂಬಿಕೆಯಲ್ಲಿ ನಾನು ಸದಾ ಇದ್ದೆನೆ ಎಂದಿದ್ದಾರೆ.

25 ವರ್ಷಗಳ ಅನ್ಯಾಯದ ಬಳಿಕ ನಮ್ಮ ಕಾಂಗ್ರೆಸ್ ಸರ್ಕಾರ ಈ ಲಿಂಕ್ ಕೆನಾಲ್ ಯೋಜನೆಯನ್ನು ಅನುಮೋದಿಸಿ ಕಾಮಗಾರಿ ಆರಂಭಿಸಿದೆ. ನಿಮ್ಮಲ್ಲಿ ನನ್ನ ವಿನಂತಿ – ಈ ಮಹತ್ವದ ಕಾಮಗಾರಿಗೆ ದಯವಿಟ್ಟು ವಿರೋಧ ಮಾಡಬೇಡಿ. ಇದು ಲಕ್ಷಾಂತರ ರೈತರ ಜೀವನವನ್ನು ಪರಿವರ್ತನೆ ಮಾಡಬಲ್ಲದೊಂದು ಯೋಜನೆ. ಲಿಂಕ್ ಕೆನಾಲ್ (Kunigal, Link Canal work) ಮೂಲಕ ಹೇಮೆ ಹರಿಯುವಂತೆ ಮಾಡಲು ನಿಮ್ಮ ಸಹಕಾರ ಅಪೇಕ್ಷಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನಂತೂ ಈ ಕನಸಿನ ಯೋಜನೆಯನ್ನು ಸಂಪೂರ್ಣಗೊಳಿಸದೇ ಬಿಡುವವರಲ್ಲ. ರೈತರ ನಿಟ್ಟುಸಿರು ಮೌನವಾಗಬಾರದು – ನೀರೇ ನಮ್ಮ ಬದುಕಿನ ಬಂಡವಾಳ ಎಂದು ಶಪಥ ಮಾಡಿದ್ದಾರೆ.

Leave a Reply

Your email address will not be published. Required fields are marked *