ಬೆಂಗಳೂರು | ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ (RCB Event Tragedy) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿ, ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹ ಸಂದರ್ಭಗಳಲ್ಲಿ ರಾಜೀನಾಮೆ ನೀಡಿದ್ದ ತಮ್ಮ ನಾಯಕರ ಪಟ್ಟಿ ಬಿಡುಗಡೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಇದನ್ನು ಓದಿ : RCB celebration Tragedy | ಕಾಂಗ್ರೆಸ್ ಇಮೇಜ್ ಹೆಚ್ಚಿಸಲು 11 ಜನರ ಬಲಿ ಪಡೆದ ಸರ್ಕಾರ..!
ನಾವು ಒಂದು ಜವಾಬ್ದಾರಿಯುತ ಸರ್ಕಾರವಾಗಿ ಇದರ ಹೊಣೆ ಹೊತ್ತಿದ್ದೇವೆ. ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ರಾಜ್ಯ ಇಂಟಲಿಜೆನ್ಸ್ ಮುಖ್ಯಸ್ಥರನ್ನು ವರ್ಗಾಯಿಸಲಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇನೆ. ನಿವೃತ್ತ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ ಎಂದರು.
ಬಿಜೆಪಿಯ ಆಕ್ರೋಶ ಜನಪರವಲ್ಲ, ರಾಜಕೀಯ ದುರುದ್ದೇಶದ ಪ್ರೇರಿತ ಎಂದು ಅವರು ಕಿಡಿಕಾರಿದರು. ಹೆಣಗಳ ಮೇಲೆ ರಾಜಕಾರಣ ಮಾಡುವುದು ಬಿಜೆಪಿಗೆ ಹೊಸದಲ್ಲ. ಸತ್ತವರ ಮೇಲೆ ರಾಜಕೀಯ ಮಾಡಲು ಬಿಜೆಪಿ ಮುಂದೆ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದ (RCB Event Tragedy) ಅವಘಡಗಳನ್ನು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
2002ರ ಗುಜರಾತ್ ಹತ್ಯಾಕಾಂಡ: 2,000 ಮಂದಿ ಸಾವಿಗೆ ಕಾರಣವಾದರೂ, ನರೇಂದ್ರ ಮೋದಿ ರಾಜೀನಾಮೆ ನೀಡಿಲ್ಲ, ವಿಷಾದವೂ ವ್ಯಕ್ತಪಡಿಸಿಲ್ಲ.
ಪಹಲ್ಗಾಮ್ ಉಗ್ರದಾಳಿ (ಏಪ್ರಿಲ್): 26 ಭಾರತೀಯರು ಸತ್ತುಹೋಗಿದ್ರೂ ಪ್ರಧಾನಿ ರಾಜೀನಾಮೆ ಕೇಳಲಿಲ್ಲ.
ಮಣಿಪುರ ಹಿಂಸೆ: ನೂರಾರು ಮಂದಿ ಸಾವಿಗೀಡಾದರೂ 20 ತಿಂಗಳು ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ತೊಲೆಯಲಿಲ್ಲ.
ಮೋರ್ಬಿ ಸೇತುವೆ ಕುಸಿತ: 140 ಮಂದಿ ಸತ್ತುಹೋದರೂ ತನಿಖೆ ಕೂಡಾ ಸಮರ್ಪಕವಾಗಿ ನಡೆಯಿಲ್ಲ.
ಕುಂಭಮೇಳ ದುರಂತ: 30 ಯಾತ್ರಿಕರ ಸಾವು – ಯಾವುದೇ ತಾತ್ಕಾಲಿಕ ಸ್ಪಷ್ಟನೆ ಇಲ್ಲ.
ಈ ಪ್ರಕರಣದಲ್ಲಿ ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮಿಡಿತವಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಧೀಶರ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದೆ. ಇದರ ವರದಿಯ ಆಧಾರದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇವೆಲ್ಲ ದೃಷ್ಟಿಯಿಂದ ಬಿಜೆಪಿ ನಾಯಕರಿಗೆ ನಮ್ಮ ರಾಜೀನಾಮೆ ಕೇಳುವ ನೈತಿಕ ಹಕ್ಕೇ ಇಲ್ಲ. ದುರಂತಗಳ ಸಂದರ್ಭದಲ್ಲಿ ರಾಜಕೀಯ ಪ್ರದರ್ಶನ ಮಾಡುವ ಬದಲಾಗಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಸಿಎಂ ಬಲವಾದ ಸಂದೇಶ ನೀಡಿದರು.
One thought on “RCB Event Tragedy | ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಬಿಜೆಪಿಗರಿಗೆ ಸಿಎಂ ಟಾಂಗ್”