Special Action Force | ಕೋಮು ವೈಷಮ್ಯ ತಡೆಯಲು ದೇಶದ ಮೊದಲ Special Action Force ರೆಡಿ

ಮಂಗಳೂರು | ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ವೈಷಮ್ಯ ಮತ್ತು ಶಾಂತಿ ಭಂಗ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ, ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಮಂಗಳೂರಿನಲ್ಲಿ ಹೊಸದಾಗಿ Special Action Force (SAF) ಅನ್ನು ಸ್ಥಾಪಿಸಲಾಗಿದೆ. ಇದು ಭಾರತದ ಮೊದಲ ಕೋಮು ವೈಷಮ್ಯ ತಡೆ ಕಾರ್ಯಪಡೆ ಎನ್ನುವುದೇ ವಿಶೇಷ.

Special Action Force ಗೆ ಅತ್ಯುತ್ತಮ ಮಟ್ಟದ ಸಿಬ್ಬಂದಿ, DIG ನೇತೃತ್ವ

SAF ಪಡೆಗೆ DIG ರ‍್ಯಾಂಕ್‌‍ನ ಅಧಿಕಾರಿಗಳ ನೇತೃತ್ವ ದೊರೆತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಾಚರಿಸಲು ಒಟ್ಟು  248 ಮಂದಿ ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಪಡೆಯಲ್ಲಿ ಅತೀ ಹೆಚ್ಚು ಸಿಬ್ಬಂದಿ  ANF (Anti-Naxal Force) ನಿಂದ ವರ್ಗಾವಣೆಗೊಂಡಿದ್ದಾರೆ. ಪ್ರತಿ ಜಿಲ್ಲೆಯ SAF ಘಟಕವು ಸುಮಾರು 78 ಮಂದಿ ಸಿಬ್ಬಂದಿಯನ್ನೊಳಗೊಂಡಿದೆ.

ಇದನ್ನು ಓದಿ : BJP Protest | ಸಿಎಂ, ಡಿಸಿಎಂ ರಾಜೀನಾಮೆಗೆ ತುಮಕೂರು ಬಿಜೆಪಿ ಆಗ್ರಹ..!

ಮಂಗಳೂರಿನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ಸ್ಪೆಷಲ್ ಆ್ಯಕ್ಷನ್ ಫೋರ್ಸ್‌ನ ಪ್ರಧಾನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರು ಈಗ ಡಿಐಜಿಪಿಯಾಗಿ ಈ ಹೊಸ ಪಡೆಗೆ ನೇತೃತ್ವ ನೀಡುತ್ತಿದ್ದಾರೆ.

Special Action Force ಪಡೆಗೆ ಯಾವುದೇ ಪ್ರಕರಣಗಳ ವಿಚಾರಣೆ ಅಥವಾ ತನಿಖೆ ನಡೆಸುವ ಅಧಿಕಾರವಿಲ್ಲ. ಬದಲಿಗೆ, ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಗುಪ್ತಚರ ಮಾಹಿತಿ ಸಂಗ್ರಹ, ಶಂಕಿತ ಚಟುವಟಿಕೆಗಳ ನಿಗಾವಹಣೆ,  ಸಂಚುಗಳನ್ನು ವಿಫಲಗೊಳಿಸುವ ಕಾರ್ಯ, ಮತ್ತು ಭಯ ಮುಕ್ತ ಸಮಾಜ ನಿರ್ಮಾಣ ಈ ಫೋರ್ಸ್‌ನ ಉದ್ದೇಶವಾಗಿದೆ.

ಮಂಗಳೂರು ಕೇಂದ್ರವಾಗಿದ್ದು, ಇಲ್ಲಿಯೇ Special Action Force ಕಾರ್ಯಪಡೆಯ ಮುಖ್ಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಈ ಪಡೆ ಕಾರ್ಯನಿರ್ವಹಿಸಲಿದೆ.

Leave a Reply

Your email address will not be published. Required fields are marked *