
Fire Accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಹುಲ್ಲಿನ ಬಣವೆ ಸುಟ್ಟು ಭಸ್ಮ..!
ತುಮಕೂರು | ತಾಲ್ಲೂಕಿನ ಹಾಲುಹೊಸಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Accident) ರೈತನೊಬ್ಬ ಸಂಗ್ರಹಿಸಿದ್ದ ರಾಗಿ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಲಕ್ಷಕ್ಕೂ ಹೆಚ್ಚು ಮೌಲ್ಯದ ನಷ್ಟ ಸಂಭವಿಸಿದೆ. ಹುಲ್ಲಿನ ಬಣವೆ ಬೆಂಕಿಗೆ (Fire Accident) ಆಹುತಿ ಗೂಳೂರು ಹೋಬಳಿಯ ಹಾಲುಹೊಸಹಳ್ಳಿ ಗ್ರಾಮದ ರೈತ ರಂಗಸ್ವಾಮಿ ಅವರು ಜಾನುವಾರುಗಳ ಮೇವಿಗಾಗಿ ತಮ್ಮ ಹಿತ್ತಲಲ್ಲಿ ರಾಗಿ ಹುಲ್ಲು ಸಂಗ್ರಹಿಸಿ ಬಣವೆ ಹಾಕಿದ್ದರು. ಹಠಾತ್ವಾಗಿ ಈ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ….