ತುಮಕೂರು | ಗೂಗಲ್ ಲೊಕೇಶನ್ ನಲ್ಲಿ Temple Near Me ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಭದ್ರತೆ ಇಲ್ಲದಿರುವ ದೇವಾಸ್ಥಾನಗಳ ಹುಂಡಿ ಹೊಡೆದರೆ ಹಣ ಇದ್ದೇ ಇರುತ್ತದೆ ಎಂದು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಮೈ ಮೇಲಿನ ಒಡವೆಗಳನ್ನು ಕಳ್ಳತನ (Thieves Arrested) ಮಾಡುತ್ತಿದ್ದ ಖದೀಮರನ್ನು ಇದೀಗ ತುಮಕೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯುವ (Thieves Arrested) ಯತ್ನ ವಿಫಲ
ಜೂನ್ 4 ರಂದು ರಾತ್ರಿ ಸುಮಾರು 11.30 ರ ಸಮಯದಲ್ಲಿ ಅಪರಿಚಿತ ಮೂವರು ಗುಬ್ಬಿ ತಾಲೂಕಿನ ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ ಕೊಡಿಗೇಹಳ್ಳಿ ಗ್ರಾಮದ ಕೋಡಿ ಕೆಂಪಮ್ಮ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲು ದೇವಸ್ಥಾನದ ಒಳಗೆ ಹೋಗಿ ಹುಂಡಿಯನ್ನು ಹೊರಗಡೆ ತಂದಾಗ ಯಾರೋ ಕೂಗುವ ಶಬ್ದ ಕೇಳಿಸಿಕೊಂಡು ಹುಂಡಿ ಮತ್ತು ಕಾರನ್ನು ದೇವಸ್ಥಾನದ ಪಕ್ಕದಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ. ಈ ಬಗ್ಗೆ ಕೋಡಿ ಕೆಂಪಮ್ಮ ದೇವಸ್ಥಾನದ ಕಮಿಟಿ ಅಧ್ಯಕ್ಷ ಭೋಜರಾಜು ಸಿ ಎಸ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಇದನ್ನು ಓದಿ : Cauvery water tank | ವಾಟರ್ ಮಾಫಿಯಾಗೆ ಬ್ರೇಕ್ ; ಕಾವೇರಿ ವಾಟರ್ ಟ್ಯಾಂಕ್ ಗೆ ಭರ್ಜರಿ ರೆಸ್ಪಾನ್ಸ್
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕೆಎ 02 ಎಡಿ 6543 ಕಾರಿನ ಮಾಲೀಕರ ವಿಳಾಸಕ್ಕೆ ಹೋಗಿ ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಿಕೊಂಡು ಬಲೆ ಬೀಸಿದ್ದರು.
ಇದೀಗ ಬಂಧಿತರನ್ನು (Thieves Arrested) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾರೆಹಳ್ಳಿ ಗ್ರಾಮದ ನರಸಿಂಹಮೂರ್ತಿ (21) ಅದೇ ಗ್ರಾಮದ ನಾಗರಾಜು (18) ಇಬ್ಬರೂ ಕೂಡ ಡ್ರೈವರ್ ಕೆಲಸ ಮಾಡುವವರಾಗಿದ್ದಾರೆ. ಮತ್ತೋರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದಾನೆ.

ಬಂದಿತರಿಂದ ಹುಂಡಿ ಹೊಡೆದ ಹಣದಿಂದ ಖರೀದಿ ಮಾಡಿದ್ದ ಟೊಯೋಟಾ ಇಟಿಯೋಸ್ ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಸಿಎಸ್ ಪುರ, ಗುಬ್ಬಿ ಮತ್ತು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಸೇರಿದ ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಗೆಗೆ ಬಂದಿದೆ. ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಎಸ್ಪಿ ಅಶೋಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.