Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!

ಪಾವಗಡ | ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡಜಾಲೊಡು ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ವೇಣುಗೋಪಾಲಸ್ವಾಮಿ (Venugopala swamy Temple) ದೇವಾಲಯದಲ್ಲಿ ನಿಧಿಗಾಗಿ ಅಕ್ರಮವಾಗಿ ಗುಂಡಿ ತೆಗೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹಳೆಯ ಹೊಯ್ಸಳ ಶೈಲಿಯ ಈ ದೇವಾಲಯವು ಇತಿಹಾಸ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ನಿಧಿ ಆಸೆಪಡುವ ದುಷ್ಕರ್ಮಿಗಳಿಂದ ಹಾನಿಯಾಗಿರುವುದು ಆತಂಕ ಹುಟ್ಟಿಸಿದೆ.

ನಿಧಿ ಆಸೆಗೆ ವೇಣು ಗೋಪಾಲಸ್ವಾಮಿ (Venugopala swamy Temple) ದೇಗುಲಕ್ಕೆ ಕನ್ನ

ಗ್ರಾಮಸ್ಥರ ಪ್ರಕಾರ, ಈ ದೇಗುಲದಲ್ಲಿ ಹಿಂದಿನ ತಿಂಗಳಲ್ಲೇ ಕಿಡಿಗೇಡಿಗಳು ಮೂಲ ವಿಗ್ರಹದ ಗೋಪುರವನ್ನು ಭಗ್ನಗೊಳಿಸುವ ಕೆಲಸ ಮಾಡಿದ್ದರು. ಇದೀಗ ಇನ್ನೊಮ್ಮೆ ಇದೇ ಸ್ಥಳದಲ್ಲಿ ನಿಧಿ ಹುಡುಕಾಟದ ಹೆಸರಲ್ಲಿ ಭದ್ರವಾದ ಬಂಡೆಗಳನ್ನು ತೆಗೆದು ಗುಂಡಿ ನಿರ್ಮಿಸಲು ಯತ್ನಿಸಲಾಗಿದೆ. ದೊಡ್ಡದಾದ ಕಲ್ಲು ಮೇಲ್ಭಾಗದಲ್ಲಿದ್ದ ಕಾರಣ, ಸುರಂಗವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Karnataka Rain Updates | ಜೂನ್ 19 ರ ವರೆಗೆ ರಾಜ್ಯದಾದ್ಯಂತ ಭಾರೀ ಮಳೆ

ಈ ದೇಗುಲ ನಗದು ಅಥವಾ ಆಭರಣಗಳ ಜತೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲದಿದ್ದರೂ, ಅಂಥ ನಂಬಿಕೆಗಳು ಮತ್ತು ನಿಧಿ ಬೇಟೆಯ ಹವ್ಯಾಸಗಳು ಸ್ಮಾರಕವನ್ನು ಹಾಳು ಮಾಡುತ್ತಿರುವುದನ್ನು ಗ್ರಾಮಸ್ಥರಲ್ಲಿ ಆತಂಕವನ್ನು ಹುಟ್ಟಿಸಿದೆ. ಈ ಘಟನೆಯಿಂದ ದೇಗುಲದ ಸ್ಮಾರಕ ಶಿಲ್ಪದ ಭಾಗಗಳು ಹಾನಿಗೊಳಗಾಗಿದ್ದು, ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯು ಇಂತಹ ಐತಿಹಾಸಿಕ ಸ್ಥಳಗಳಲ್ಲಿ ನಿರಂತರ ನಿಗಾವಹಿಸಿ, ಭದ್ರತೆ ಹೆಚ್ಚಿಸಬೇಕೆಂಬ ಆಗ್ರಹ ಮಾಡಿದ್ದಾರೆ ಮತ್ತು ಆಗಾಗ್ಗೆ ನಡೆಯುತ್ತಿರುವ ಈ ರೀತಿಯ ಘಟನೆಗಳು ಸಾಂಸ್ಕೃತಿಕ ಎಳೆಗಳನ್ನು ನಾಶಮಾಡಬಾರದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *