ದಾವಣಗೆರೆ | ಸಮಾಜಿಕ ನ್ಯಾಯವನ್ನು ಸ್ಥಾಪಿಸಲು, ಜನರ ನಿಜವಾದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು (Caste Survey) ತಿಳಿದುಕೊಳ್ಳುವುದು ಅತ್ಯಗತ್ಯ. ಆದರೆ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 27ನೇ ಜನಗಣತಿಯನ್ನೇ (Caste Survey) ಮುಂದೆ ಸಾಗಿಸುತ್ತಿದೆ. ಆದರೆ ಅದರಲ್ಲೂ ಸ್ಯಾಂಪಲ್ಬೇಸ್ ಅಲ್ಲದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸ್ಪಷ್ಟತೆ ಇಲ್ಲ. ಆದರೆ ನಮ್ಮ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಈ ಮೂರೂ ಅಂಶಗಳನ್ನು ಒಳಗೊಂಡಿವೆ ಎಂದು ಅವರು ತಿಳಿಸಿದರು.
ಜಾತಿ ಸಮೀಕ್ಷೆಯ (Caste Survey) ವೈಶಿಷ್ಟ್ಯ
ಸಿದ್ದರಾಮಯ್ಯ ಅವರು ಒತ್ತಿಹೇಳಿದಂತೆ, ರಾಜ್ಯ ಸರ್ಕಾರದ ಸಮೀಕ್ಷೆ ಯಾವುದೇ ನಿಯಮ ವಿರುದ್ಧವಾಗಿಲ್ಲ. ಈ ಸಮೀಕ್ಷೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಂಶಗಳನ್ನೂ ಒಳಗೊಂಡಿದೆ. ಇದಲ್ಲದೆ, ಜಾತಿ ಗಣತಿಯನ್ನೂ ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಕೇಂದ್ರ ಸರ್ಕಾರದ ಜನಗಣತಿ ಮತ್ತು ನಮ್ಮ ಸಮೀಕ್ಷೆ ನಡುವೆ ಈ ಅಂಶಗಳಲ್ಲಿ ವ್ಯತ್ಯಾಸವಿದೆ ಎಂದು ಹೇಳಿದರು.
ಇದನ್ನು ಓದಿ : Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!
ವರ್ಗಗಳ ಕಾಯ್ದೆಯ ಸೆಕ್ಷನ್ 11(1) ಪ್ರಕಾರ, ಸಮೀಕ್ಷೆಯ ವರದಿಗೆ ಹತ್ತು ವರ್ಷವಾದ ಬಳಿಕ ಮರು ಸಮೀಕ್ಷೆ ನಡೆಯಬೇಕು. ಈ ನ್ಯಾಯಮೂರ್ತಿ ಆಧಾರದ ಮೇಲೆ ಈಗಿನ ಮರುಸಮೀಕ್ಷೆ ನಡೆಯುತ್ತಿದೆ.

ಸಮಾಜದ ವಿವಿಧ ವರ್ಗಗಳು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಸಮೀಕ್ಷೆ ಪ್ರಾಮಾಣಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಪ್ರಾಧಾನ್ಯ ನೀಡುವ ನಿಟ್ಟಿನಲ್ಲಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
One thought on “Caste Survey | ಸಾಮಾಜಿಕ ನ್ಯಾಯಕ್ಕಾಗಿ ಮರುಸಮೀಕ್ಷೆ ಅಗತ್ಯ – ಸಿದ್ದರಾಮಯ್ಯ”