ಬೆಂಗಳೂರು | ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್)ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಕೆ. ಸುರೇಶ್ (DK Suresh) ಅವರು ಅಧ್ಯಕ್ಷರಾಗಿ, ಕುದೂರು ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ (DK Suresh) ಡಿ ಕೆ ಸುರೇಶ್
16 ನಿರ್ದೇಶಕರಲ್ಲಿ 14 ಜನರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದ್ದು, ಉಳಿದ ಇಬ್ಬರನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ. ಇದೇ ವ್ಯವಸ್ಥೆಯಡಿ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ (DK Suresh) ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಯಾವುದೇ ಪ್ರತಿಸ್ಪರ್ಧಿಯಿಲ್ಲದ ಕಾರಣ ಅವಿರೋಧ ಆಯ್ಕೆ ಸಾಧಿಸಿದ್ದಾರೆ.
ಇದನ್ನು ಓದಿ : Chest Pain | ಎದೆ ನೋವು ಯಾವೆಲ್ಲಾ ಕಾರಣಗಳಿಗೆ ಬರುತ್ತೆ ಗೊತ್ತಾ..?
ಚುನಾವಣೆಯ ಬಳಿಕ ಮಾತನಾಡಿದ ಅವರು, ಈ ಹಾಲು ಒಕ್ಕೂಟದ ಹಾಲು ಉತ್ಪಾದಕರು ಹಾಗೂ ನಿರ್ದೇಶಕರು ಬದಲಾವಣೆಗೆ ನಂಬಿಕೆಯಿಂದ ಮತ ಹಾಕಿದ್ದಾರೆ. ಈ ಒಕ್ಕೂಟವನ್ನು ರೈತಪರ, ಜನಪರ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಕನಕಪುರ ಹಾಲು ಒಕ್ಕೂಟದಲ್ಲಿ ಆರಂಭಿಸಿರುವ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಪಂಚಾಯ್ತಿ ಮಟ್ಟದಲ್ಲಿ ಆರಂಭಿಸಿದ ಈ ಯೋಜನೆ ಬಮೂಲ್ನ ಮೂಲಕ ಹೆಚ್ಚಿನ ರೈತರಿಗೆ ಲಾಭ ನೀಡುವಂತೆ ರೂಪುಗೊಳ್ಳಲಿದೆ.

ರೈತರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ನ್ಯಾಯ ಒದಗಿಸಲು, ಹಾಲು ಉತ್ಪಾದಕರ ಬದುಕು ಸುಧಾರಿಸಲು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.