Gubbi Politics | 500 ಕೋಟಿ ಖರ್ಚು ಮಾಡಿ ಗೆಲ್ಲದ ಕಪ್ಪೆರಾಯ ನಿಖಿಲ್

ತುಮಕೂರು | ಜಿಲ್ಲೆಯ ಗುಬ್ಬಿ (Gubbi Politics) ಪಟ್ಟಣದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದು ರಾಜಕೀಯ ಕುತೂಹಲ ಹೆಚ್ಚಿದಿದೆ.

ಗುಬ್ಬಿ (Gubbi Politics) ಶಾಸಕ ಎಸ್ ಆರ್ ಶ್ರೀನಿವಾಸ್ ಬೆಂಬಲಿಗರಿಂದ ಪೋಸ್ಟ್

ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ) ಅವರ ಅಭಿಮಾನಿಗಳು, ನಿಖಿಲ್ ಕುಮಾರಸ್ವಾಮಿಯ ಬಗ್ಗೆ ಲೇವಡಿಯ ಭಾಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ್ದಾರೆ. ವಿಶೇಷವಾಗಿ “500 ಕೋಟಿ ರೂಪಾಯಿ ಖರ್ಚು ಮಾಡಿದರೂ ಗೆಲ್ಲದ ಕಪ್ಪೆರಾಯ”, “ಮೂರು ಕ್ಷೇತ್ರಗಳಲ್ಲಿ ಸೋತು ಹುಳಿ ಹಣ್ಣಾದ ನಾಯಕ” ಎಂಬಂತ ವಿಭಿನ್ನ ಶೈಲಿಯ ಪೋಸ್ಟ್‌ಗಳು ಎಸ್.ಆರ್. ಶ್ರೀನಿವಾಸ್ ಫ್ಯಾನ್ ಪೇಜ್‌ಗಳಲ್ಲಿ ಹರಿದಾಡುತ್ತಿವೆ.

ಇದನ್ನು ಓದಿ : Shivaraj Tangadagi | ಸಚಿವ ಶಿವರಾಜ್ ತಂಗಡಗಿ ಕಾರು ಅಪಘಾತ..!

“ಗುಬ್ಬಿಯಲ್ಲಿ ನಾಗನನ್ನು ಗೆಲ್ಲಿಸುತ್ತಾನಂತೆ” ಎಂಬ ಶೀರ್ಷಿಕೆ ಬಳಸುವ ಮೂಲಕ ನಿಖಿಲ್ ಅವರ ಗೆಲುವು ಸಾಧ್ಯವಿಲ್ಲ ಎಂಬ ಧ್ವನಿಯನ್ನು ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು, ತೀವ್ರ ರಾಜಕೀಯ ವ್ಯಂಗ್ಯವನ್ನೂ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಜೆಡಿಎಸ್ ನಾಯಕತ್ವದ ಪರವಾಗಿ ನಡೆಯುತ್ತಿರುವ ಈ ಸದಸ್ಯತ್ವ ಅಭಿಯಾನ ರಾಜಕೀಯವಾಗಿ (Gubbi Politics) ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ಲೇವಡಿ ಹಾಗೂ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮುಂದಿನ ಚುನಾವಣಾ ಸಮರದ ತೀವ್ರತೆಯನ್ನು ಸೂಚಿಸುತ್ತಿವೆ.

One thought on “Gubbi Politics | 500 ಕೋಟಿ ಖರ್ಚು ಮಾಡಿ ಗೆಲ್ಲದ ಕಪ್ಪೆರಾಯ ನಿಖಿಲ್

Leave a Reply

Your email address will not be published. Required fields are marked *